udayanews

ಗುರುವಾರ, ಅಕ್ಟೋಬರ್ 27, 2022

ಬಾತ್ ಟವೆಲ್ ಉಟ್ಟು ಕಾಲೇಜಿಗೆ ಹೋಗುವ ವಿದ್ಯಾರ್ಥಿ !!

  19 ವರ್ಷ ಪ್ರಾಯದ ಈ ಭೂಪನಿಗೆ ಡ್ರೆಸ್ ಅಂದರೆ ಆಗದು. ಎಷ್ಟೆಂದರೆ, ಯಾರಾದರೂ ಧರಿಕೊಳ್ಳು ಅಂತ ಒತ್ತಾಯ ಮಾಡಿ ಡ್ರೆಸ್ ಗ್ರಿಸ್ ಕೊಟ್ಟರೆ ಅದನ್ನು ಹರಿದು ಚಿಂದಿ ಮಾಡಿ ಹಾಕುತ್ತಾನೆ.

 ಆದರೆ, ಕಾಲೇಜಿಗೆ ಹೋಗಬೇಕಲ್ಲ, ಹೌದು, ಬಿಎ ಕಲಿಯಲು ಕಾಲೇಜಿಗೆ ಹೋಗುತ್ತಾನೆ, ಕಾಲೇಜಿಗೆ ಹೋಗುವಾಗ ಅಂಡರ್ ವೇರ್ ಮತ್ತು ಅದರ ಮೇಲೆ ಒಂದು ಬಾತ್ ಟವೆಲ್ ಹೊದ್ದುಕೊಂಡು ಹೋಗುತ್ತಾನೆ. ಮಧ್ಯಪ್ರದೇಶದ ಪಿಚ್ಚೋಡಿ ಹಳ್ಳಿಯ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಣ್ಣಯ್ಯ ಅಭಾಶಿಗೆ ಚಿಕ್ಕಂದಿನಿಂದಲೂ ಬಟ್ಟೆ ಅಂದರೆ ಆಗದು. 

ಇಷ್ಟು ವರ್ಷಗಳ ಕಾಲ ಅವನ ಬಡ ತಾಯಿ ಅವನಿಗೆ ಬಟ್ಟೆ ಹಾಕಲು ಶತಾಯಗತಾಯ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆದರೆ, ಅವನನ್ನು ವಿದ್ಯಾವಂತನಾಗಿ ಮಾಡಲು ಪಣ ತೊಟ್ಟ ಆಕೆ ಶಾಲೆಯ ಶಿಕ್ಷಕರು, ಅಧಿಕಾರಿಗಳಳ ಕೈಕಾಲು ಹಿಡಿದು, ಹೇಗೋ 12ನೇ ತರಗತಿ ತನಕ ಅಂಡರ್ ವೇರಲ್ಲಿ ಅವನನ್ನು ಶಾಲೆಗೆ ಕಳಿಸಿ, ಓದಿಸುವಲ್ಲಿ ಸಫಲಳಾದಳು. 

ಆದರೆ, ಡಿಗ್ರಿ ಮಾಡಲು ಕಾಲೇಜಿಗೆ ಸೇರಿಸುವ ಸಮಯದಲ್ಲಿ ಕಣ್ಣಯ್ಯನ ಆ ವಿಚಿತ್ರ ನಡವಳಿಕೆಯಿಂದಾಗಿ ಸಮಸ್ಯೆ ಎದುರಾಯಿತು. ಕಣ್ಣಯ್ಯ ಓದಿನಲ್ಲಿ ತುಂಬಾ ಹುಷಾರಿದ್ದಾನೆ. ಅವನ ಕೈಬರಹವೂ ಬಹು ಸುಂದರ. ಅಂತೆಯೇ ಅವನ ನಡವಳಿಕೆ ಕೂಡಾ. ಪಾಠೇತರ ಚಟುವಟಿಕೆಗಳಲ್ಲೂ ಮುಂದಿದ್ದಾನೆ. ಹೀಗಾಗಿ ಶಿಕ್ಷಕರಿಗೆ ಅವನು ಅಚ್ಚುಮೆಚ್ಚಿನ ಶಿಷ್ಯನಾಗಿರುವುದರಿಂದ ಅವರೆಲ್ಲ ಸೇರಿ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡು, ಅವನನ್ನು ಒಂದು ಸ್ಪೆಷಲ್ ಕೇಸಾಗಿ ಪರಿಗಣಿಸಿ ಕಾಲೇಜಿಗೆ ಸೇರಿಸಿಕೊಳ್ಳಲು ಒಪ್ಪಿಸಿದರು. ಕಣ್ನಯ್ಯ ಈಗ ಎರಡನೇ ವರ್ಷದ ಬಿಎ ಮಾಡುತ್ತಿದ್ದಾನೆ. ಪ್ರತೀದಿನ ಚಪ್ಪಲಿ, ಬ್ಯಾಕ್ ಪ್ಯಾಕ್, ಅಂಡರ್ ವೇರ್ ಮತ್ತು ಬಾತ್ ಟವಲಲ್ಲಿ ಕಾಲೇಜಿಗೆ ಹೋಗಿ ಬರುತ್ತಾನೆ. ಶಿಕ್ಷಕರಂತೆ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರೂ ಅವನನ್ನು ಒಪ್ಪಿಕೊಂಡಿದ್ದಾರೆ

(


G.T.satish ವಾಲ್ ನಿಂದ ).Panju Ganguli

ಅಪ್ಪು ಚಿತ್ರ ಗಂಧದ ಗುಡಿಯ ಪ್ರಚಾರಕ್ಕೆ ಇಳಿದ ಕಾಫಿನಾಡು ಚಂದು


  ಚಿಕ್ಕಮಗಳೂರು : ಅಪ್ಪು ಅಭಿನಯದ ಗಂಧದಗುಡಿ ಚಿತ್ರದ ಪ್ರಚಾರಕ್ಕೆ  ಕಾಫಿನಾಡ ಚಂದು ಇಳಿದಿದ್ದಾನೆ .ತಲೆಯಲ್ಲಿ ಗಂಧದ ಗುಡಿ ಹೆಸರು ಹಾಕಿಸಿಕೊಂಡು  ಚಿಕ್ಕಮಗಳೂರು ನಗರದಲ್ಲಿ ಪ್ರಚಾರ ಮಾಡುತ್ತಿದ್ದಾನೆ  ಪುನೀತ್ ಅಣ್ಣನ ಸಿನಿಮಾ ಎತ್ತರಕ್ಕೆ ಬೆಳೆಯಲಿ ಎಂದು ಮನವಿ     ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ವಿಶ್ ಮೂಲಕ  ಹೆಸರಾಗಿರೋ ಚಂದುತನ್ನ ವಿಭಿನ್ನ ಶೈಲಿಯಲ್ಲಿ ಪ್ರಚಾರಕ್ಕೆ ಇಳಿದು ಗಮನ ಸೆಳೆದಿದ್ದಾನೆ 

ಬುಧವಾರ, ಅಕ್ಟೋಬರ್ 26, 2022

ಪೌರಕಾರ್ಮಿಕರ ಪಾದ ಪೂಜೆ ;ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಿಸಿದ ಶಾಸಕ ಸಿ. ಟಿ. ರವಿ

 


ಚಿಕ್ಕಮಗಳೂರು : ಅತ್ತ ಪ್ರಧಾನಿ ನರೇಂದ್ರ ಮೋದಿ  ಸೈನಿಕರೊಂದಿಗೆ ದೀಪಾವಳಿ ಆಚರಿಸಿದರೆ ಇತ್ತ ಶಾಸಕ      ಸಿ. ಟಿ. ರವಿ ಪೌರಕಾರ್ಮಿಕರೊಂದಿಗೆ ದೀಪಾವಳಿ ಆಚರಿಸಿ ಸಂಭ್ರಮಿಸಿದರು .

ಪೌರ ಕಾರ್ಮಿಕರ ಬಡಾವಣೆಗೆ ತೆರಳಿ ,ಹಿರಿಯ ಕಾರ್ಮಿಕರಿಗೆ ಆರತಿ ಎತ್ತಿ ಪಾದಪೂಜೆ ಮಾಡಿ,ಹೂವಿನ ಹಾರ ಹಾಕಿ  ಗೌರವ ಸಲ್ಲಿಸಿದರು . ಶಾಸಕರ ವಿಶಿಷ್ಟ ರೀತಿಯ ದೀಪಾವಳಿ ಆಚರಣೆಗೆ ಪೌರಕಾರ್ಮಿಕರು ಮನಸೋತರು.

ಪೌರಕಾರ್ಮಿಕರ ಮಕ್ಕಳೊಂದಿಗೆ ಬೆರೆತು ಪಟಾಕಿ ಸಿಡಿಸಿದರು .ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ,ಸಿಡಿಎ ಅಧ್ಯಕ್ಷ ಆನಂದ್ ,ಪೌರಾಯುಕ್ತ ಬಸವರಾಜ್ ,ನಗರಸಭೆ ಮಾಜಿ ಅಧ್ಯಕ್ಷೆ ಕವಿತಾ ಶೇಖರ್ ,ತಮ್ಮಯ್ಯ  ಇತರರು ಜತೆಗೂಡಿದ್ದರು .

ಸೋಮವಾರ, ಅಕ್ಟೋಬರ್ 24, 2022

ಸಂಭ್ರಮಕ್ಕೆ ಸಾಕ್ಷಿಯಾಯಿತು ದೇವಿರಮ್ಮ ಬೆಟ್ಟ ; ಸಾವಿರಾರು ಭಕ್ತರಿಂದ ದೇವಿಯ ದರ್ಶನ

 


ಚಿಕ್ಕಮಗಳೂರು : ಜಿಲ್ಲೆಯ ಶಕ್ತಿ ದೇವತೆಗಳಲ್ಲಿ ಒಂದಾದ ಮಲ್ಲೇನಹಳ್ಳಿಯ ದೇವಿರಮ್ಮ ಬೆಟ್ಟ  ಸಂಭ್ರಮಕ್ಕೆ ಸಾಕ್ಷಿಯಾಯಿತು .

ಸಾವಿರಾರು ಭಕ್ತರು ತಂಡೋಪತಂಡವಾಗಿ ಬೆಟ್ಟಕ್ಕೆ ಲಗ್ಗೆ ಇಟ್ಟರು .ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತರು ಸೂರ್ಯೋದಯಕ್ಕೆ ಮುನ್ನವೇ ಕಡಿದಾದ ಹಾದಿಯಲ್ಲಿ  ಬೆಟ್ಟ ಏರತೊಡಗಿದರು.

ಕರೋನ ಹಿನ್ನಲೆಯಲ್ಲಿ ಕಳೆದ 2ವರ್ಷಗಳಿಂದ   ದೇವಿರಮ್ಮ ಬೆಟ್ಟಕ್ಕೆ ಭಕ್ತರು  ಏರುವುದನ್ನು ನಿರ್ಬಂಧಿಸಲಾಗಿತ್ತು . ಈ ವರ್ಷ ಎಲ್ಲವೂ ಮುಕ್ತ ಮುಕ್ತ . 

ಬೆಟ್ಟವೇರಿ ದೇವಿಯ ದರ್ಶನ ಪಡೆದು  ಪ್ರಕೃತಿ ಸೌಂದರ್ಯ ಆಹ್ಲಾದಿಸಿ ಹಿಂದಿರುಗಿದರು .ಪುನೀತ್ ಭಾವಚಿತ್ರ ಇದ್ದ ಬಾವುಟದೊಂದಿಗೆ ಆಗಮಿಸಿದ ಪುನೀತ್ ಅಭಿಮಾನಿಗಳು ಎಲ್ಲರ ಗಮನ ಸೆಳೆದರು .

ಪ್ರಕೃತಿಯು ಭಕ್ತರ ಆಶಯಕ್ಕೆ ತಣ್ಣೀರು ಎರಚಲಿಲ್ಲ .ಬೆಟ್ಟ ಪೂರ್ತಿ ಭಕ್ತರಿಂದ ಗಿಜಿಗುಡುತ್ತಿತ್ತು .ಜಿಲ್ಲಾಡಳಿತ ಅಗತ್ಯ ಬಂದೋಬಸ್ತ್ ಮಾಡಿತ್ತು 


ಶನಿವಾರ, ಅಕ್ಟೋಬರ್ 22, 2022

ಸರ್ಕಾರಿ ಶಾಲೆಗಳಲ್ಲಿ ಪೋಷಕರಿಂದ ದೇಣಿಗೆ ಸಂಗ್ರಹದ ಸುತ್ತೋಲೆ: ಸಿಪಿಐ ತೀವ್ರ ಟೀಕೆ

 ಚಿಕ್ಕಮಗಳೂರು :ಶಾಲೆಗಳಲ್ಲಿನ ಮೂಲ ಸೌಕರ್ಯಗಳನ್ನು ಒದಗಿಸಲು ಶಾಲಾ ಮಕ್ಕಳ ಪೋಷಕರಿಂದ ದೇಣಿಗೆ ಸಂಗ್ರಹಿಸುವ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆಯ ಕ್ರಮ ರಾಜ್ಯ ಸರ್ಕಾರ ಆರ್ಥಿಕ ದಿವಾಳಿತನ ಎದುರಿಸುತ್ತಿರುವುದರ ಸಂಕೇತವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಟೀಕಿಸಿದೆ .

 ಈ ಕೂಡಲೆ ದೇಣಿಗೆ ಸಂಗ್ರಹದ ಸುತ್ತೋಲೆ ಹಿಂಪಡೆಯಬೇಕೆಂದು  ಪಕ್ಷ (ಸಿಪಿಐ) ಆಗ್ರಹ ಪಡಿಸಿದ್ದು ಶಾಲಾ ಶಿಕ್ಷಣ ಮಕ್ಕಳ ಸಂವಿಧಾನ ಬದ್ಧ ಮೂಲಭೂತ ಹಕ್ಕಾಗಿದೆ.ಮಕ್ಕಳ ಕಲಿಕೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಾಗರೀಕ ಸರ್ಕಾರದ ಜವಾಬ್ದಾರಿ ಯಾಗಿದೆ. ಸುತ್ತೋಲೆ ಹಿಂಡೆಯದಿದ್ದರೆ   ರಾಜ್ಯಾದ್ಯಂತ ಚಳವಳಿ ರೂಪಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಪಕ್ಷದ  ರಾಜ್ಯ ಸಹ ಕಾರ್ಯದರ್ಶಿ ಅಮ್ಜದ್ ಎಚ್ಚರಿಸಿದ್ದಾರೆ 


ಕಾಡೂಗೊಲ್ಲರ ಸಂಘಟಿತ ಹೋರಾಟಕ್ಕೆ ಶಾಸಕರ ಬೆಂಬಲ

 ಚಿಕ್ಕಮಗಳೂರು-ಕಾಡುಗೊಲ್ಲರ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೊಳಿಸಬೇಕು ಎನ್ನುವ ಬೇಡಿಕೆಗೆ ತಮ್ಮ ಸಂಪೂರ್ಣ ಬೆಂಬಲವಿದ್ದು,ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಶಾಸಕ ಸಿ.ಟಿ.ರವಿ ಕರೆ ನೀಡಿದರು. ಕಾಡೂಗೊಲ್ಲರ  ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಸಖರಾಯಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. . 

ಎಸ್‌ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸುವ  ಹೋರಾಟದಲ್ಲಿ  ಗುರಿ ಮುಟ್ಟಿಸುವವರೆಗೆ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.  


 ಶಾಸಕ ಬೆಳ್ಳಿ ಪ್ರಕಾಶ್  ಕಾಡುಗೊಲ್ಲರ ಬೇಡಿಕೆ ಈಡೇರಿಕೆಗೆ ಶ್ರಮಿಸುತ್ತೇನೆ ಎಂದು ಭರವಸೆ ಕೊಟ್ಟರು 

ರಾಜ್ಯದಲ್ಲಿ 'ಫಸಲ್‌ ಬಿಮಾ ಯೋಜನೆ' ಫೇಲ್‌ : ಪಾವತಿಸಿದ ಹಣದಷ್ಟೂ ಬಂದಿಲ್ಲ !! ;

 


 ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈಹಿಡಿಯಬೇಕಾದ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಕರ್ನಾಟಕದಲ್ಲಿ ಸಂಪೂರ್ಣ ಫೇಲ್‌ ಆಗಿದೆ. ಈಗ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳೂ ಬೆಳೆ ವಿಮೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಕಷ್ಟಕಾಲದಲ್ಲಿ ರೈತರ ನೆರವಿಗೆ ಬರಬೇಕಿದ್ದ ಬೆಳೆ ವಿಮೆ ಯೋಜನೆಯು ರಾಜ್ಯದಲ್ಲಿ ಅನ್ನದಾತರ ವಿಶ್ವಾಸವನ್ನು ಕಳೆದುಕೊಂಡು ವರ್ಷಗಳೇ ಸಂದಿವೆ. ಈಗ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳೂ  ವಿಮೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈಹಿಡಿಯಬೇಕಾದ 'ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ' ಸಂಪೂರ್ಣ ಫೇಲ್‌ ಆಗಿದೆ.ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಅತಿವೃಷ್ಟಿ, ನೆರೆ ಹಾವಳಿಯಿಂದ ವ್ಯಾಪಕ ಬೆಳೆ ನಷ್ಟವಾಗಿದ್ದು, 2019-20ನೇ ಸಾಲಿನಿಂದ ಈವರೆಗೆ ಒಟ್ಟು 53.94 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾಳಾಗಿದೆ. ಇಂತಹ ಸಂಕಷ್ಟ ಕಾಲದಲ್ಲಿ ಬೆಳೆ ವಿಮೆ ಆಸರೆಯಾಗಬೇಕಿತ್ತು. ಆದರೆ, ರೈತರು ತಮ್ಮ ಬೆವರು ಸುರಿಸಿ ಕಟ್ಟಿದ ಪ್ರೀಮಿಯಂ ಕೂಡ ಕೈಗೆ ಸಿಗುತ್ತಿಲ್ಲ..!ಬೆಳೆ ಹಾಳಾದ ಸಂದರ್ಭದಲ್ಲಿ ನಿಗದಿತ ಪರಿಹಾರದ (ಸಮ್‌ ಅಶ್ಯೂರ್ಡ್‌) ಬದಲಿಗೆ ಕಟ್ಟಿದ ಪ್ರೀಮಿಯಂ ಕೂಡ ರೈತರಿಗೆ ಸಿಗುತ್ತಿಲ್ಲ. ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟಕ್ಕೆ ಪರಿಹಾರ ಪಾವತಿಸಬೇಕಿದೆ. ಆದರೆ, ಆಣೆವಾರು ಮಾಡುವಲ್ಲಿ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ವಿಮೆ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿರುವುದು, ವಿಮಾ ಷರತ್ತುಗಳಲ್ಲಿ ಲೋಪವಿರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ರೈತರು ಸಂತ್ರಸ್ತರಾಗಿದ್ದಾರೆ. ರೈತರು ತಮ್ಮ ಈ ಎಲ್ಲ ಕಷ್ಟವನ್ನು ಹೇಳಿಕೊಳ್ಳಲು ವಿಮೆ ಕಂಪೆನಿಗಳ ಟೋಲ್‌ ಫ್ರೀ ಸಂಖ್ಯೆಗಳೇ ಕೆಲಸ ಮಾಡುತ್ತಿಲ್ಲ.*ಸಾಲದಲ್ಲೇ ಕಂತು ಕಡಿತ:*ಬ್ಯಾಂಕ್‌, ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಮಂಜೂರಾತಿ ವೇಳೆ ವಿಮೆ ಕಂತನ್ನು ಕಡಿತ ಮಾಡಿಕೊಂಡೇ ರೈತರಿಗೆ ಸಾಲದ ಮೊತ್ತ ನೀಡಲಾಗುತ್ತದೆ. ಕಡ್ಡಾಯ ವ್ಯವಸ್ಥೆಯಂತಾಗಿರುವ ಈ ವಿಮೆ ಕಂತು ಬಹುತೇಕ ವಿಮಾ ಕಂಪೆನಿಗಳ ಪಾಲು ಎಂಬಂತಾಗಿದೆ. ಬೆಳೆ ಸಾಲ ಪಡೆಯುವ ರೈತರ ಹೊರತಾಗಿ, ಉಳಿದ ಬಹುತೇಕ ರೈತರು ವಿಮೆ ಯೋಜನೆ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.ಪರಿಣಾಮ ರಾಜ್ಯದಲ್ಲಿ 2019ರಿಂದ ಈವರೆಗೆ ಒಟ್ಟಾರೆ 38,31,749 ರೈತರಿಗೆ ಸೇರಿದ ಒಟ್ಟು 53,94,575 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ. ಈ ಎಲ್ಲ ರೈತರೂ ಬೆಳೆ ವಿಮೆಯನ್ನೇ ಮಾಡಿಸಿರಲಿಲ್ಲ. ಬೆಳೆ ವಿಮೆ ಕೈಹಿಡಿಯುತ್ತದೆ ಎಂಬ ಭರವಸೆಯನ್ನೇ ಈ ರೈತರು ಕಳೆದುಕೊಂಡಿದ್ದಾರೆ..                      ಶಬರೀಶ್  ಸದಸ್ಯರು  ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಶೃಂಗೇರಿ