udayanews

ಶುಕ್ರವಾರ, ಫೆಬ್ರವರಿ 12, 2021

ಮಹಿಳಾ ಕ್ರಿಕೆಟ್ ತಂಡಕ್ಕೆಕಾಫಿನಾಡಿನ ಶಿಶಿರಗೌಡ ಆಯ್ಕೆ


 ಚಿಕ್ಕಮಗಳೂರು :ಅಂತರ ರಾಜ್ಯ ಮಹಿಳಾ ಏಕದಿನ ಪಂದ್ಯಾವಳಿಗೆ ಕರ್ನಾಟಕ  ತಂಡಕ್ಕೆ ನಗರದ ಶಿಶಿರ ಗೌಡ ಆಯ್ಕೆಯಾಗಿದ್ದಾರೆ .

ಎಡಗೈ ಬ್ಯಾಟಿಂಗ್ ಹಾಗೂ ಬಲಗೈ ವೇಗದ ಬೌಲರ್ ವಿಭಾಗದಲ್ಲಿ ಖ್ಯಾತಿ ಪಡೆದಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಇಂಜಿನಿಯರಿಂಗ್  ವ್ಯಾಸಂಗ ಮಾಡುತ್ತಿದ್ದಾರೆ .

೨೦೧೫ ರಿಂದ ವಿವಿಧ ವಿಭಾಗಗಳಲ್ಲಿ ಪ್ರತಿನಿಧಿಸಿರುವ ಶಿಶಿರಗೌಡ ಆರ್. ಪಿ .ಕ್ರಿಕೆಟ್ ಅಕಾಡಮಿಯ ರಾಮದಾಸ್ ಪ್ರಭು ಅವರಲ್ಲಿ ತರಬೇತಿ ಪಡೆದಿದ್ದಾರೆ .ಡಾಕ್ಟರ್ ಅಶ್ವತ್ ಬಾಬು ತ್ರಿವೇಣಿ ದಂಪತಿಗಳ ಪುತ್ರಿ ಈಕೆ . ಈಕೆಯ ಆಯ್ಕೆ ಕಾಫಿ ನಾಡಿನ ಕ್ರಿಕೆಟ್ ವಲಯದಲ್ಲಿ ಹರ್ಷವನ್ನು ಉಂಟುಮಾಡಿದೆ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ